Thursday, July 13, 2006

ಭೂಮಿ

ಬಾಗಿಲ ಬಳಿ ಬಂದು
ಮನದ ಕದವ ತಟ್ಟಿ
ನೀನೆನ್ನ ಕಣ್ಣಿಗೆ ಕಟ್ಟಿ
ಕನಸ ಲೋಕವ ನಾ ಮುಟ್ಟಿ.

ಬೆಂದ ಭೂಮಿ ಬಿಟ್ಟು ಬಾಯಿ
ಬರದಿ ಬಿರಿದು ಕಾದ ಮೈ
ಬಾನ ಕಡೆಗೆ ಕಣ್ಣ ಚಾಚಿ
ಭರದಿ ಸುರಿಯಂದಂಗಲಾಚಿ

ಮುತ್ತ ಮಳೆಯನಿಳೆಗೆ ಸುರಿಸು
ನಿತ್ಯತೃಪ್ತ ಹೊಳೆಯ ಹರಿಸು
ಸುಪ್ತಚಿತ್ತಕೆ ಜೀವ ಬರಿಸು
ಮತ್ತ ಮತ್ತ ಮುತ್ತಿ ಹನಿಸು

ನೀನಾರು ಸರದಾರ
ನಾ ನೀನಿತ್ತ ಮುತ್ತು
ನೀನೂರು ಹರದಾರಿ
ನಾನಿತ್ತ ಕನಸ ಹೊತ್ತು

ನಾರಾಧೆ ನೀನಿರದೆ
ನಾನರ್ಧ ನೀನರ್ಧ
ತಾವಿರದೆ ನಾವಿದ್ದರೆ
ಇದ್ದರೇನಿರದಿದ್ದರೇನು.

ನೀನುಕ್ಕು ನಾನದಿರು
ನಾನಧರ ನೀಮಧುರ
ನೀನೀರು ನಾತಾವರೆ
ಚಂದಿರನೀ ನಾತಾರೆ.

No comments: