Thursday, December 18, 2008

ಯಂತ್ರ

ಬೇಂದ್ರೆಯಂತೆ ಬೇಯಲೆಂದು
ನಾಡನುಡಿಯ ಕೇಳಲೆಂದು
ನಡೆನಡೆಯುತ ಬಂದೆನು

ಬಿಸಿಲ ಬೇಗೆ ಬಸ್ಸ ಹೊಗೆ
ಅಟ್ಟಹಾಸಿ ಕಾರ ವಿಕಾರ ನಗೆ
ಬೆಳಗು ಬೈಗಿನುದ್ದಕೂ ಬೈಕ ಭರಭರ
ಕೊರಳಿರದ ಕಂಠಗಳ ಭೀಕರ ಹೂಂಕಾರ

ತುಟಿಗಳಾಡುತಿದ್ದರೂ ಮಾತು ಕೇಳದಾದವು
ಹೊರಟ ದನಿಗಳಲ್ಲಲ್ಲೇ ತಾವು ಸತ್ತು ಬಿದ್ದವು
ಶ್ರವಣವಿಲ್ಲ ಶ್ರಾವಣವಿಲ್ಲ ಎಲ್ಲ ಒಣ ಒಣ
ಮಾತು ಮೂಕವಾಯಿತಲ್ಲ ಎಲ್ಲ ಭಣಭಣ

ಒಂದು ಚೂರು ಬೇಯಲಿಲ್ಲ
ಬಳಲಿ ಬೆಂಡಆದೆನು
ಅನುಭವದಭಾವದಲಿ
ಕನಲಿ ಕವನ ಕಾರಿದೆನು.

No comments: