Thursday, December 18, 2008

ಮುಂಬೈ ಮಾರಿ

ಮುಂಬೈಯ ಬಾತ ಬಾಯಿ
ಬಾಯ್ಮುಂದ ಮಾತ ಮಾಯಿ

"ತಾಜಿ"ನ ತಾಜಾ ತೇಜ
ಕೆಡುಕೀಗೆ ಒಡಕ ಗಾಜ
ಆ "ನಾರಿ ಮಾನ" ಮಾರಿ
"ತ್ರಿನೀತಿಗೆ" ಭೀತಿ ಬೀರಿ

ಇರುಳಿನಲಿ ನುಸುಳಿ ಅರಿಯು
ಗುರಿಯಿರದೆ ಗುಂಡಗರೆದು
ಅರಿವಿರದ ನರರ ಮೇಧ
ಅರಿವಳಿದು ತಿಳಿವು ಕಳೆದು

ಹೊರೆಯಣ್ಣ ನೆರೆಯ ಪಾಕ
ನೆರೆವಿಗೆಲಾ!"ವಂಗ"ಪಾಕ
ಪಾಕಿನ ಪಾಕ ಮಾಡಿ
ಕೈ-ಕಮಲ-ಕುಡುಗೋಲು ಕೂಡಿ?

ನರೇಂದ್ರನುಡಿಗಿಲ್ಲ ಖಬರು
ಅಚ್ಯುತ ಪಟ್ಟ-"ಪಟ್ಟಿ" ಪೊಗರು
ವಿಜಯವೇ ಹೇಮಂತರಿಗೆ?
ಅಶೋಕವೇ ಸಂದೀಪರಿಗೆ?

ಕಾದಿಹೆವು ಕಾದುವೆವು ಕೊರಗದಿರಿ
ಸಂಹರಿಸಿ ಮಡಿದರೂ ಮರುಗದಿರಿ
ಅಟ್ಟುವೆವು ಮೆಟ್ಟುವೆವು ನಾವು ಬಲವಂತ
ಆದರೀ, ಸರಕಾರೀ ಅಪಚಾರ ಬೇಡ ಭಗವಂತ!!!



No comments: